ಹಂಪಿಯಲ್ಲಿ ?ಕಿಲಾಡಿ ಕಿಟ್ಟಿ ಹಾಡು
Posted date: 02 Mon, Apr 2012 ? 09:41:46 AM

 ಸಂಗಮ ಫ಼ಿಲಂಸ್ ಲಾಂಛನದಲ್ಲಿ ಎಸ್.ವಿ.ಶಿವಕುಮಾರ್ ಅವರು ನಿರ್ಮಿಸುತ್ತಿರುವ ‘ಕಿಲಾಡಿ ಕಿಟ್ಟಿ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ ‘ಮಧುರ ಹುಚ್ಚು ಮೊದಲೇ ಇತ್ತು ಕಳ್ಳ ಎಂಬ ಹಾಡಿನ ಚಿತ್ರೀಕರಣ ಐತಿಹಾಸಿಕ ನಗರಿ ಹಂಪಿಯಲ್ಲಿ ನಡೆದಿದೆ. ಹೇಮಕೂಟ, ಕಮಲ ಭವನ, ಪುಷ್ಕರಣಿ ಮುಂತಾದಕಡೆ ಮೂರು ದಿನಗಳ ಕಾಲ ಈ ಹಾಡನ್ನು ಚಿತ್ರಿಸಿಕೊಳ್ಳಲಾಗಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ ಈ ಗೀತೆಗೆ ಶ್ರೀನಗರ ಕಿಟ್ಟಿ ಹಾಗೂ ಹರಿಪ್ರಿಯಾ ಹೆಜ್ಜೆ ಹಾಕಿದರು. ಸೋನುನಿಗಮ್ ಹಾಗೂ ಶ್ರೇಯಾಘೋಷಾಲ್ ಈ ಹಾಡನ್ನು ಹಾಡಿದ್ದಾರೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಎಂದು ನಿರ್ದೇಶಕ ಅನಂತರಾಜು ತಿಳಿಸಿದ್ದಾರೆ.
     ರವಿಕುಮಾರ್ ಸಾನಾರ  ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೆಸಿಗಿಫ಼್ಟ್ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ, ಮಾಸ್ ಮಾದಾ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ  ಕಲಾ ನಿರ್ದೇಶನವಿರುವ  ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಹರಿಪ್ರಿಯ, ಸ್ಮಿತಾ(ನಿವೇದಿತಾ), ಮಾನ್ಸಿ, ಶರಣ್, ದಿಲೀಪ್, ಆನಂದ್, ಸತ್ಯಜಿತ್, ಸಂಗೀತ, ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ಬಿ.ಜಯಮ್ಮ, ವೀಣಾಸುಂದರ್, ರಮೇಶ್ ಪಂಡಿತ್, ಬ್ರಹ್ಮಾವರ್, ವಿ.ಮನೋಹರ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed